Saturday, April 02, 2011

ಕುದಿಯುತ್ತಿರುವ ಪಾತ್ರೆಯಲ್ಲಿ ಕಪ್ಪೆಗಳು ನಾವು

ನಮ್ಮಲ್ಲೀಗ    ಪರೀಸರ  ಮಲೀನತೆ  ಹೆಚ್ಚುತ್ತಿದೆ.  ಭೂಮಿಯ  ವಾತಾವರಣದಲ್ಲಿರುವ   ಇಂಗಾರಾಮ್ಲ  ಪ್ರಮಾಣ  ಹೆಚ್ಚಾಗಿ  ಅಲ್ಲೋಲ ಕಲ್ಲೋಲ ವಾಗುತ್ತಿದೆ.  ಜನ ಮಾತ್ರ   ನಮ್ಮ  ಸ್ವಾರ್ಥ ಸಾಧನೆಯಲ್ಲಿ ನಿರತರಾಗಿ  ಸಮಾಜದ  ಉಳಿವಿನ  ಬಗೆಗೆ  ನಿರ್ಲಪ್ತರಾಗಿದ್ದಾರೆ.  ಕಾರಣ  ಈ  ಬದಲಾವಣೆಗಳು  ನಮ್ಮ ಗಮನಕ್ಕೆ ಬಾರದಷ್ಟು  ನಿದಾನವಾಗಿ  ಸಾಗುತ್ತಿದೆಯೋ ?  ವರ್ಷವೊಂದರಲ್ಲಿ  ಮಿಲಿಯದಲ್ಲಿ   ಎರಡು ಅಂಶ  ಮಾತ್ರ  ಹೆಚ್ಚಿದ್ದಲ್ಲವೇ.  ಅದುದರಿಂದ  ನಮ್ಮ ಜೀವನಾವದಿಯಲ್ಲಿ ಏನೂ  ಆಗುವುದಿಲ್ಲ ಎಂಬ  ಸ್ವಾರ್ಥವೋ ?   



Atmospheric CO2 data

ಇದನ್ನು  ನೋಡುವಾಗ  ನೆನಪಾಗುವುದು   ಈ  ಕಟ್ಟುಕತೆ   [ ವಾಸ್ತವಿಕವಲ್ಲ ].  ಕಪ್ಪೆಯೊಂದನ್ನು  ಕುದಿಯುವ  ನೀರಿಗೆ  ಹಾಕಿದರೆ  ಅದಕ್ಕೆ  ತಕ್ಷಣ  ಬಿಸಿ  ಅರಿವಾಗಿ  ಹೊರಗೆ  ಹಾರುತ್ತದೆ.  ಅದರ ಬದಲಿಗೆ  ತಣ್ಣಿರಿನಲ್ಲಿ  ಕಪ್ಪೆಯಿರಿಸಿ   ನಿದಾನವಾಗಿ  ಉರಿ ಹೆಚ್ಚು ಮಾಡಿದರೆ  ಅದಕ್ಕೆ  ಹೊಂದಿಕೊಳ್ಳುತ್ತಾ   ಹೋಗುವ  ಕಪ್ಪೆ  ಬೆಂದು ಹೋಗುವ  ತನಕ  ಕುಶಿಯಿಂದಲೇ  ಇರುತ್ತದೆ.  ಹಾಗೆ  ಭೂಮಿ  ಬಿಸಿಯೇರುವ  ಲಕ್ಷಣಗಳನ್ನೆಲ್ಲ    ನಿರಾಕರಿಸಿ  ನಾವೂ  ಆರಾಮವಾಗಿದ್ದೇವೆ.  ಕಾಳಜಿ ವ್ಯಕ್ತ ಪಡಿಸುವ ವ್ಯಕ್ತಿ ಉಳಿದವರಿಂದ ಉಗಿಸಿಕೊಳ್ಳುತ್ತಾನೆ.  


1 comment:

Pejathaya said...

ಪ್ರೀತಿಯ ಗುರು ಗೋವಿಂದ್
ನಮ್ಮೂರಾದ ಚಿಕ್ಕಮಗಳೂರಿನ ಬಾಳೆಹೊಳೆಯಲ್ಲಿ ಎಪ್ಪತ್ತರ ದಶಕದಲ್ಲಿ ವಾತಾವರಣದ ಉಷ್ಣಾಂಶ ಸೆಲ್ಶಿಯಸ್ ಮೂವತ್ತರ ಮೇಲೆ ಏರಿದರೆ ಮಳೆ ಬೀಳುತ್ತಾ ಇತ್ತು.

ಇಂದು ಮೂವತ್ತೆಂಟಕ್ಕೇರಿದರೂ ಮಳೆ ನಾಸ್ತಿ!

ತಾವು ಹೇಳಿದಂತೆ ಒಲೆಯ ಮೇಲೆ ಇರಿಸಿದ ತಂಪಾದ ನೀರಿನ ಪಾತ್ರೆಯಲ್ಲಿನ ಮಂಡೂಕಗಳಂತೆ ನಾವಿನ್ನೂ ಮಿಥ್ಯ ಖುಶಿಯಲ್ಲೇ ಇದ್ದೇವೆ.
ಪರಿಸರ ಬಿಸಿ ಏರುತ್ತಿರುವ ಬಗ್ಗೆ ನಮಗೆ ಅರಿವೇ ಇಲ್ಲದವರಂತಿದ್ದರೆ ......ಮುಂದಕ್ಕೆ ತಮ್ಮ ಬರಹದಲ್ಲಿನ ಕಪ್ಪೆಗಾದ ಗತಿಯೇ ನಮಗೆ!
ಪರಿಸರವನ್ನು ಹಸಿರಾಗಿಡಲು ಪ್ರಯತ್ನಿಸೋಣ.

ತಮಗೆ ಹುಟ್ಟುಹಬ್ಬದ ಶುಭ ಹಾರೈಕೆಗಳು.

ಅಭಿಮಾನದಿಂದ

ಪೆಜತ್ತಾಯ ಎಸ್. ಎಮ್.